Sunday, 5 March 2017

06-03-2017 ಪೇದೆಗೆ ನೇಣಿಗೆ ಶರಣು

ಪೇದೆಗೆ ನೇಣಿಗೆ ಶರಣು ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆಯ ತಾಲ್ಲೂಕಿನ ಬೇಗೂರು ಪೋಲೀಸ್ ಠಾಣೆ ವಸತಿನಿಲಯದಲ್ಲಿ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ನಡದಿದೆ. ಬೇಗೂರು ಠಾಣಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಬ್ಬಹಳ್ಳಿ ಗ್ರಾಮದ ಪ್ರಸಾದ್ (27) ಎಂಬ ಪೇದೆ ಆತ್ಮಹತ್ಯೆ ಮಾಢಿಕೊಂಢ ದುರ್ದೈವಿಯಾಗಿದ್ದಾನೆ. ಪ್ರಸಾದ್ ಮೂರು ತಿಂಗಳಿನಿಂದ ವಿಶೇಷ ಪಡೆಯಲ್ಲಿ ಬೇಗೂರು ಠಾಣೆಯಲ್ಲಿ ಕಾರ್ಯರ್ನಿಹಿಸುತ್ತಿದ್ದ ಎಂದು ತಿಳಿದುಬಂದಿದೆ. ಇವರು 2008 ಬ್ಯಾಚ್‍ನವರಾಗಿದ್ದು ಯಳಂದೂರು ಅಲ್ಲಿ ಕರ್ತವ್ಯ ಮುಗಿಸಿ ನಂತರ ಬೇಗೂರು ಠಾಣೆಗೆ ಮೂರು ತಿಂಗಳಿ ಹಿಂದೆಯಷ್ಟೇ ವರ್ಗಾವಣೆಯಾಗಿತ್ತು ಎನ್ನಲಾಗಿದೆ. ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು