Sunday, 19 March 2017

ಚುನಾವಣೆ ರಂಗು ಎಣ್ಣೆ ವಶ. 19-03-2017 ಚಾಮರಾಜನಗರ ಸುದ್ದಿ

ನೀತಿ ಸಂಹಿತೆ ಉಲ್ಲಂಘನೆ : ಮದ್ಯ, ತರಕಾರಿ ಬಾತ್ ವಶ

ಚಾಮರಾಜನಗರ, ಮಾ. 19 (ಎಸ್.ವೀರಭದ್ರಸ್ವಾಮಿ):- ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣಿ ಹಿನ್ನಲೆಯಲ್ಲಿ ಅಬಕಾರಿ ಹಾಗೂ ಸೆಕ್ಟರ್ ಅಧಿಕಾರಿಗಳು ಶನಿವಾರ ವಿವಿಧೆಡೆ ದಾಳಿ ನಡೆಸಿದ್ದು  ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಲಾಗಿದ ಮದ್ಯ ಹಾಗೂ ಕಾರ್ಯಕರ್ತರಿಗೆ ಹಂಚಲು ಸಿದ್ದಪಡಿಸಿದ್ದ ತರಕಾರಿ ಬಾತ್ ವಶಪಡಿಸಿಕೊಂಡಿದ್ದಾರೆ.
 ಕಗ್ಗಳ ಗ್ರಾಮದಲ್ಲಿ ದೊಡ್ಡನಾಯಕ ಎಂಬುವರಿಂದ 1.440 ಲೀಟರ್ ಹಾಗೂ ರಾಚನಾಯಕ ಎಂಬುವರಿಂದ 1.800 ಲೀಟರ್ ಮದ್ಯ, ತೊಂಡವಾಡಿ ಗ್ರಾಮದಲ್ಲಿ ರಾಜು ಎಂಬುವರಿಂದ 1.080 ಲೀಟರ್ ಮದ್ಯ, ಬೇಗೂರು ಗ್ರಾಮದಲ್ಲಿ ಸಂತೋಷ್À ಎಂಬುವರಿಂದ 1.080 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ.
ಕಬ್ಬಹಳ್ಳಿ  ಗ್ರಾಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್vರ ಸಭೆಗೆ ತಯಾರು ಮಾಡಿದ್ದ ತರಕಾರಿ ಬಾತ್‍ನ್ನು ವೇದಿಕೆ ಹಿಂಬಾಗದಲ್ಲಿದ್ದ ಕೆ.ಎಂ.ಸುಬ್ಬಣ ಅವರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳಾದ ನಳಿನ್ ಅತುಲ್  ತಿಳಿಸಿದ್ದಾರೆ.

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು