Wednesday, 1 March 2017

ವಾಟ್ಸಾಪ್ ಅಲ್ಲಿ ಬುಲೆಟ್., ಬೆಸ್ತು ಬಿದ್ದ ಪೋಲೀಸರು.!ಸಾಮಾಜಿಕ ಜಾಲತಾಣಕ್ಕಿಲ್ಲ ಕಡಿವಾಣ, ಡಿ.ಜಿ ಅವರಿಗೆ ದೂರು ಸಲ್ಲಿಕೆ

ವಾಟ್ಸಾಪ್ ಅಲ್ಲಿ ಜೀವಂತ ಬುಲೆಟ್., ಬೆಸ್ತು ಬಿದ್ದ ಪೋಲೀಸರು.! ಸಾಮಾಜಿಕ ಜಾಲತಾಣಕ್ಕಿಲ್ಲ ಕಡಿವಾಣ, ಡಿ.ಜಿ ಅವರಿಗೆ ದೂರು ಸಲ್ಲಿಕೆ ಚಾಮರಾಜನಗರ: ವಾಟ್ಸಾಪ್‍ನ ಗುಂಪಿನಲ್ಲಿ ಹರಿದಾಡಿದ ಸುಳ್ಳು ಸುದ್ದಿಯನ್ನು ನೋಡಿ ಪೂರ್ವಪರ ಪರಿಶೀಲನೆ ಮಾಡದೇ ವಾಹಿನಿಯಲ್ಲಿ ಸುದ್ದಿ ಪ್ರಕಟಿಸಿದ ಹಿನ್ನಲೆಯಲ್ಲಿ ಚಾಮರಾಜನಗರ ಪಟ್ಟಣ ಪೋಲೀಸರು ಪರಿಶೀಲನೆ ಮಾಡಿ ಕೊನೆಗೆ ಬೆಸ್ತು ಬಿದ್ದ ಘಟನೆ ನಡೆದಿದೆ. ಚಾಮರಾಜನಗರದ ವಾಟ್ಸಾಪ್‍ನ ಗುಂಪಿನಲ್ಲಿ ಕಾಲೇಜಿನ ವಸತಿ ನಿಲಯದಲ್ಲಿ ಜೀವಂತ ಗುಂಡುಗಳ ಪತ್ತೆ, ಪಟ್ಟಣ ಪೋಲೀಸರಿಂದ ಪರಿಶೀಲನೆ ಎಂದು ಹರಿದಾಡಿದ ಸುಳ್ಳು ಸುದ್ದಿ ಹಾಗೂ ಕೆಲವು ವಿದ್ಯುನ್ಮಾನ ಮಾದ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೆ ಪಟ್ಟಣ ಪೋಲೀಸರು ಗಲಿಬಿಲಿಯಾಗಿ ತಮ್ಮ ಕಾರ್ಯವೈಖರಿಯನ್ನು ಚುರುಕುಗೊಳಿಸಿದರು. ಮಾದ್ಯಮದಲ್ಲಿ ಪ್ರಕಟವಾದ ವಾಹಿನಿ ವರದಿಗಾರರನ್ನು ಆ ವೇಳೆಗಾಗಲೇ ಪೋಲೀಸರು ಸಂಪರ್ಕಿಸಲಾಗಿ ಅದು ಸುದ್ದಿ ಸುಳ್ಳೆಂದು ಗೊತ್ತಾದಾಗ ಆರಕ್ಷಕರು ನಿಟ್ಟಿಸಿರು ಬಿಟ್ಟಿದ್ದಾರೆ. ಈಗಾಗಲೆ ಚಾಮರಾಜನಗರ ಕರ್ನಾಟಕ, ತಮಿಳುನಾಡು ಕೇರಳ ಗಡಿಭಾಗದಲ್ಲಿ ನಕ್ಸಲ್ ಬಗ್ಗೆ ಮಾಹಿತಿ ಬಗ್ಗೆ ಅದಿಕಾರಿ ವಲಯದಲ್ಲಿ ಆಗಾಗ ಸಭೆ ನಡೆಯುತ್ತಿದ್ದು ಈ ನಡುವೆ ಇಂತಹ ಸುದ್ದಿ ಬಂದಾಗ ನಿಜವಿರಬಹುದು ಎಂದು ಸಾರ್ವಜನಿಕರು ನಂಬುವ ಸ್ಥಿತಿ ತಲುಪುವಂತಾಗಿದೆ. ಈ ತಪ್ಪು ಮಾಹಿತಿ ಪೋಲೀಸರಷ್ಟೇ ಅಲ್ಲ ಸಾರ್ವಜನಿಕರನ್ನು ಸ್ವಲ್ಪ ಕಾಲ ಗೊಂದಕ್ಕೀಡು ಮಾಡಿತು. ಈ ಬಗ್ಗೆ ಮೈಸೂರು ಐ.ಜಿ.ಪಿ ಅವರನ್ನು ಸಂಪರ್ಕಿಸಲಾಗಿ ಘಟನೆ ಬಗ್ಗೆ ಮಾಹಿತಿ ತಿಳಿದಿಲ್ಲ. ಆಯಾ ವಲಯದ ವರೀಷ್ಠಾಧಿಕಾರಿಗಳಿಂದ ಮಾಹಿತಿ ತಿಳಿಯಲಾಗುತ್ತದೆ ನಂತರ ಅದರ ಬಗ್ಗೆ ಕ್ರಮವಸಹಿಸುತ್ತೇವೆ ಎಂದು ಉತ್ತರಿಸಿದರು. ಚಾಮರಾಜನಗರ ಪೊಲೀಸ್ ವರೀಷ್ಠಾದಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರನ್ನು ಸಂಪರ್ಕಿಸಲಾಗಿ, ಮಾದ್ಯಮಗಳಲ್ಲಿ ಬಂದ ಸುದ್ದಿ ಸುಳ್ಳಾಗಿದೆ ಎಂದು ಸ್ಷಷ್ಟಪಡಿಸಿದರಲ್ಲದೆ ಅಗತ್ಯ ದೂರು ಬಂದರೆ ಕ್ರಮತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಒಂದು ಮಾಹಿತಿ ಪ್ರಕಾರ ಸುಳ್ಳು ಸುದ್ದಿ ಹರಡಿದ ಗುಂಪಿನಲ್ಲಿ ಪೋಲೀಸ್ ಇಲಾಖೆಯನ್ನೆ ತೇಜೋವದೆ, ವ್ಯಂಗ್ಯವಾಡಿರುವ ಪದಳಿಂದ ಕೂಡಿರುವ ಪದ ಬಳಕೆ ಮಾಡಿರುವಂತಹ ಅಂಶಗಳು ಹರಿದಾಡಿದೆ ಎಂದು ಹೇಳಲಾಗುತ್ತಿದೆ. ಕಾನೂನಿಗೆ ವಿರುದ್ದವಾದ ಮಾಹಿತಿ ಸಂದೇಶ ಕಳಿಸಿದರೂ ಅದು ಕಾನೂನು ಕ್ರಮತೆಗೆದುಕೊಳ್ಳಬೇಕಾಗುತ್ತದೆ ಅಷ್ಟೇ ಅಲ್ಲ ಜನರನ್ನು ಭಯಬೀತರನ್ನಾಗಿಸುವಂತಹ ಸಂದೇಶ ರವಾನಿಸಿದರೂ ಬಾರತೀಯ ದಂಡ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕರಣ ದಾಖಲಿಸಿಕೊಂಡು ವಾಟ್ಸಾಫ್ ಅಲ್ಲಿ ಹರಿದಾಡಿದ ತಪ್ಪು ಮಾಹಿತಿ ಎಲ್ಲಿಂದ ಬಂತು, ಹೇಗೆ ಹರಡಿತು ಎನ್ನುವ ಮೂಲಾಂಶಗಳನ್ನು ಪತ್ತೆ ಮಾಡಬೇಕಾಗಿದೆ. ಇಲ್ಲವಾದರೆ ಸುಳ್ಳು ಸುಳ್ಳು ಸುದ್ದಿಗಳೆ ಮುಂದೊಂದು ದಿನ ನಿಜವಾದರೆ ಇಲಾಖೆಯೆ ತಲೆದಂಡವಾಗುವುದರಲ್ಲಿ ಸಂಶಯವೇ ಇಲ್ಲ ಎಂದರೆ ತಪ್ಪಾಗಲಾರದು. ****************************************************

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು