Tuesday, 31 October 2017

ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS (31-10-2017)

 ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ..       VSS



 ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ


ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಚಾಮರಾಜನಗರ: ಬಹುತೇಕ ಒಳಬಾಡಿಗೆ ಪಡೆದು, ಸರಿಯಾಗಿ ಕೆಲವರು ಬಾಡಿಗೆ ಕಟ್ಟದೆ ವ್ಯಾಪಾರ ನಡೆಸುತ್ತಿದ್ದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಹಿಂದಿನ ಅಂಗಡಿ ಮುಗ್ಗಟ್ಟುಗಳನ್ನು ಹೊಡೆದು ಹಾಕುವ ಇಂದು ತೆರವು ಕಾರ್ಯ  ಮಾಡಲಾಯಿತು.


 


ಅಂಗಡಿಗಳು ಚಾಮರಾಜನಗರ ಚಾಮರಾಜೇಶ್ವರ ದೇವಾಲಯದ ಹಿಂಬಾಗದಲ್ಲಿದ್ದು ,ಸುಮಾರು 10 ಕ್ಕೂ ಹೆಚ್ಚು ಅಂಗಡಿಗಳು  ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ  ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದರು
ಚಾಮರಾಜೇಶ್ವರ ದೇವಾಲಯದ ಹಿಂಬಾಗದಲ್ಲಿದ್ದ ಅಂಗಡಿಗಳು ಅತಿ ಕಡಿಮೆ ಬೆಲೆ ಅಂದರೆ 500 ರೂ ಗೆ ಒಬ್ಬರು ಪಡೆದು ಅದನ್ನು ಮತ್ತೋಬ್ಬರಿಗೆ 3500 ಕ್ಕೂ ಹೆಚ್ಚು ರೂಪಾಯಿಗೆ ಬಾಡಿಗೆ ನೀಡಿದ್ದರು. 





ಕಳೆದ ಎರಡು ವರ್ಷಗಳ ಹಿಂದೆ ಈ ಸಂಬಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕೆಲವರು ತಡೆಯಾಜ್ಞೆ ತಂದು ಅಲ್ಲಿಯೇ ಉಳಿದುಕೊಂಡಿದ್ದರು.ಈಗ ರಸ್ತೆ ಅಗಲೀಕರಣ ಕಾರ್ಯ ಸುಗಮವಾಗಿ ನಡೆಯುತ್ತಿರುವದರಿಂದ ದೇವಾಲಯದ ಹಿಂಬಾಗದ ರಸ್ತೆ ದೊಡ್ಡ ಅಂಗಡಿ ಬೀದಿಯಲ್ಲಿರುದ್ದು ಈಗ ಅದು 40 ಅಡಿ ರಸ್ತೆ ಅದಿಕೃತವಾಗಿರುವದರಿಂದ ಆ ಅಂಗಡಿಗಳನ್ನು ನಿರಾಂತಕವಾಗಿ ಹೊಡೆದು ಹಾಕಲು ಇಂದು ಸಹಕಾರಿಯಾಗಿದೆ ಎಂದರೆ ತಪ್ಪಾಗಲಾರದು.

ಅಂಗಡಿ ಮುಗ್ಗಟ್ಟು ತೆರವು ಕಾರ್ಯಾಚರಣೆ ಮಾಢುವುದು ಶತಸಿದ್ದ ಎಂದು ಗೊತ್ತಾಗುತ್ತಿದ್ದಂತೆಯೇ ನಾಮಾಕವಸ್ಥೆಗೆ ತಡೆಯಾಜ್ಞೆಯ ಪ್ರತಿಯನ್ನು ಅಂಗಡಿ ಮುಂದೆ ಹಾಕಿದ್ದರು. ಆದರೆ ಇದ್ಯಾವುದನ್ನ ಲೆಕ್ಕಿಸದೇ ಮುಲಾಜಿಲ್ಲದೇ ತೆರವು ಕಾರ್ಯ ನಡೆದಿದೆ.
ಅಂಗಡಿ ಮುಗ್ಗಟ್ಟು ತೆರವು ಕಾರ್ಯಾಚರಣೆ ಮಾಡುತ್ತಿರುವುದರಿಂದ ದೇವಾಲಯದ ಹಿಂಬಾಗ ಸಾಕಷ್ಟು ಜಾಗವಿರುದರಿಂದ, ದೇವಾಲಯದ ಮುಂದೆ ಹಾಗೂ ಒಳಭಾಗ  ಜೀರ್ಣೋದ್ದಾರ ಕಾರ್ಯ ನಡೆಯುತ್ತಿರುವದರಿಂದ ಚಾಮರಾಜೇಶ್ವರ ದೇವಾಲಯ ಅದ್ಬುತವಾಗಿ ಕಾಣಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು