Sunday, 26 March 2017

26-03-2017 ಗುಂಡ್ಲುಪೇಟೆ ಉಪಚುನಾವಣೆ ಅಕ್ರಮ ಮದ್ಯ ವಶ

ಗುಂಡ್ಲುಪೇಟೆ ಉಪಚುನಾವಣೆ
                                 ಅಕ್ರಮ ಮದ್ಯ ವಶ

ಚಾಮರಾಜನಗರ, ಮಾ. 25:- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಅಬಕಾರಿ ಅಧಿಕಾರಿಗಳು ವಿವಿಧÀಡೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಲಾದ ಮದ್ಯವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕು ಚಿಕ್ಕತುಪ್ಪೂರು ಗ್ರಾಮದ ನಿಂಗರಾಜು ಎಂಬುವರಿಂದ 0.720 ಮಿಲಿ ಲೀಟರ್, ಸೋಮ ಎಂಬುವರಿಂದ 0.900 ಮಿಲಿ ಲೀಟರ್, ಚಾಮರಾಜನಗರ ತಾಲ್ಲೂಕು ಮಲಿಯೂರು ಗ್ರಾಮದ ಬಸವಶೆಟ್ಟಿ ಅವರಿಂದ 0.900 ಮಿಲಿ ಲೀಟರ್,  ಹರವೆ ಗ್ರಾಮದ ಶೈಲಶೆಟ್ಟಿ ಎಂಬುವರಿಂದ 1.170 ಮಿಲಿ ಲೀಟರ್, ಕೊಳ್ಳೇಗಾಲ ತಾಲ್ಲೂಕು ಕುರುಬನಕಟ್ಟೆ ಗ್ರಾಮದ ದೇವರಾಜು ಎಂಬುವರಿಂದ 0.810 ಮಿಲಿ ಲೀಟರ್, ಅರೆಪಾಳ್ಯ ಗ್ರಾಮದ ಗೋವಿಂದ ಎಂಬುವರಿಂದ 0.900 ಮಿಲಿ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್  ತಿಳಿಸಿದ್ದಾರೆ.
                                                        ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಮಾ. 25 :- ಚಾಮರಾಜನಗರ ತಾಲ್ಲೂಕಿನ ಪಣ್ಯದಹುಂಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾರ್ಚ 27 ರಂದು ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದೆ.  ಹೀಗಾಗಿ ಪಣ್ಯದಹುಂಡಿ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು