Thursday, 8 June 2017

಻ಅರಣ್ಯದಲ್ಲಿ ಬೇಟಿಯಾಡುತ್ತಿದ್ದ ಇಬ್ಬರನ್ನು ಬಂದಿಸಿದ ಅರಣ್ಯ ಇಲಾಖಾದಿಕಾರಿಗಳು

ಚಾಮರಾಜನಗರ, ಜೂನ್ 08 : ಅರಣ್ಯದಲ್ಲಿ ಪ್ರಾಣಿ, ಪಕ್ಷಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖಾದಿಕಾರಿಗಳು ಬಂದಿಸಿದ್ದಾರೆ

ಬಂಡೀಪುರ ಅರಣ್ಯದಲ್ಲಿ ಬೇಟೆಯಾಡುವಾಗ ಕೂತನೂರು ಗ್ರಾಮದ ಸಿದ್ದರಾಜು( 28) ಭೀಮನಬೀಡು ಮಹೇಶ್ (28) ಎನ್ನುವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಎಂಟು ಜನ ಅರಣ್ಯಕ್ಕೆ ಅಕ್ರಮ ಪ್ರವೇಶ ಮಾಡಿ  ಜಿಂಕೆ, ಪಕ್ಷಿಗಳನ್ನು ಬೇಟೆಯಾಡುತ್ತಿದ್ದರು ಎನ್ನಲಾಗಿದೆ.
ಈಗಾಗಲೇ ನವಿಲು, ಕೌಜಲ ಹಕ್ಕಿ, ಕಾಡುಕೋಳಿ ಮುಂತಾದವುಗಳನ್ನು ಬೇಟೆಯಾಡಿದ್ದ ಆರೋಪಿಗಳು ಬಂಡೀಪುರ ಮುಂಟೀಪುರ ಸಸ್ಯ ಕ್ಷೇತ್ರದ ಅರಣ್ಯ ವ್ಯಾಪ್ತಿಯಲ್ಲಿ ಬೇಟೆಯಾಡಲು ಪ್ರಾಣಿಗಳು ಬರುವುದನ್ನೇ ಕಾಯುತ್ತಿದ್ದರು ಎನ್ನಲಾಗಿದೆ
ಅರಣ್ಯ ಇಲಾಖೆಯ  ಎಸಿಎಫ್ ಪೂವಯ್ಯ ಮಾರ್ಗದರ್ಶನದಲ್ಲಿ  ಆರ್‍ಎಫ್‍ಓ ಮುಕುಂದ, ಅರಣ್ಯ ರಕ್ಷಕರಾದ ದಿಲೀಪ್‍ಕುಮಾರ್, ರವಿಕುಮಾರ್, ಹರೀಶ್, ರಕ್ಷಿತ್, ಪುಟ್ಟರಾಜು, ಹನೀಫ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದರು..
ಬಂಧಿತರಿಂದ (ಕೆ.ಎ.10.ಕೆ.6307), ತಲೆ ಬ್ಯಾಟರಿ, ಬಲೆ, ಕೊಡಲಿಗಳನ್ನು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು