Friday, 17 February 2017

17-02-2017 ಚಾಮರಾಜನಗರ: ಹೆದ್ದಾರಿ ಗಸ್ತು ನಿಯೋಜನೆಗೆ ಮೂರು ಇನ್ನೋವಾ ವಾಹನಕ್ಕೆ ಎಸ್ಪಿ ಅವರಿಂದ ಚಾಲನೆ

ಹೆದ್ದಾರಿ ಗಸ್ತು ನಿಯೋಜನೆಗೆ ಮೂರು ಇನ್ನೋವಾ ವಾಹನಕ್ಕೆ ಎಸ್ಪಿ ಅವರಿಂದ ಚಾಲನೆ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ರಾಜ್ಯ ಪೋಲೀಸ್ ಇಲಾಖೆಯಿಂದ ಚಾಮರಾಜನಗರ ಜಿಲ್ಲಾ ಪೋಲಿಸ್ ಇಲಾಖೆಗೆ ಮಂಜೂರಾದ 3 ಹೆದ್ದಾರಿ ಗಸ್ತು ನಿಯೋಜನೆಗೆ ಮೂರು ಇನ್ನೋವಾ ವಾಹನಕ್ಕೆ ಜಿಲ್ಲಾ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಇಂದು ತಮ್ಮ ಕಛೇರಿ ಮುಂಭಾಗ ಚಾಲನೆ ನೀಡಿದರು. ಸದರಿ ಮಂಜೂರಾದ 3 ಹೆದ್ದಾರಿ ಗಸ್ತು ನಿಯೋಜನೆಗೆ ಮೂರು ಇನ್ನೋವಾ ವಾಹನವು ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುವುದು.ಈಗಾಗಲೇ ಗುಂಡ್ಲುಪೇಟೆಯಲ್ಲಿ ಇರುವ ವಾಹನವನ್ನು ಹನೂರು ಠಾಣಾ ವ್ಯಾಪ್ತಿಗೆ ನಿಯೋಜಿಸಲಾಗುವುದು, ಈಗ ಚಾಲನೆ ನೀಡಲಾಗಿರುವ 3 ವಾಹನಗಳು 24 ಗಂಟೆಗಳು ಕರ್ತವ್ಯನಿರತರಾಘಿದ್ದು 360 ಡಿಗ್ರಿ ಸುತ್ತುವ ಕ್ಯಾಮೆರಾ ಅಪಘಾತ, ಗಾಯಾಳುಗಳನ್ನು ಸಾಗಿಸಲು ಸ್ಟ್ರೇಕ್ಚರ್,ಪಬ್ಲಿಂಗ್ ಅಡ್ರೆಸಿಂಗ ಸಿಸ್ಟಂ,ಸರ್ಚ್‍ಲೈಟ್ ತುರ್ತು ಸಂದರ್ಭಗಳಿಗೆ ಅನುಕೂಲವಾಗುವಂತೆ ಇತ್ಯಾದಿ ಆದುನಿಕ ಸುಪಕರಣಗಳನ್ನು ಹೊಂದಿದೆ ಎಂದು ಮಾದ್ಯಮಗಳಿಗೆ ತಿಳಿಸಿದರು. ಕಾರ್ಯಕ್ರಮ ಚಾಲನಾ ಸಂದರ್ಭದಲ್ಲಿ ಎಎಸ್ಪಿ ಮುತ್ತುರಾಜ್ ಗೌಡ, ಡಿವೈಸ್ಪಿ ಗಂಗಾಧರ ಸ್ವಾಮಿ, ವಾಹನ ವಿಭಾಗದ ಸುಬ್ರಮಣ್ಯ ಸೇರಿದಂತೆ ಇತರ ಅದಿಕಾರಿಗಳು ಹಾಜರಿದ್ದರು ****************************************

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು