Tuesday, 9 May 2017

ಪಲ್ಲಟ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭ; ಎಂ. ರಾಮಚಂದ್ರ ಅಭಿಪ್ರಾಯ

ಪಲ್ಲಟ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭ; ಎಂ. ರಾಮಚಂದ್ರ ಅಭಿಪ್ರಾಯ

ಚಾಮರಾಜನಗರ: ಸಿನಿಮಾ, ಟಿ.ವಿ. ಧಾರಾವಾಹಿಗಳ ಅಬ್ಬರದಲ್ಲಿ ನಾಟಕ ಕಲೆ ಕ್ಷೀಣಿಸಬಾರದು. ನಿರಂತರವಾಗಿ ರಂಗಚಟುವಟಿಕೆಗಳು ನಡೆಯಬೇಕು. ರಂಗಭೂಮಿ ಜೀವಂತವಾಗಿದ್ದಾಗ ಮಾತ್ರ ಇತರ ಪ್ರದರ್ಶಕ ಕಲೆಗಳಿಗೂ ಬೆಲೆ ಬರುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ. ರಾಮಚಂದ್ರ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಶಾಂತಲಾ ಕಲಾವಿದರು ತಂಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಪಲ್ಲಟ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿನಿಮಾ, ಟಿವಿ ಧಾರಾವಾಹಿಗಳಿಂದಾಗಿ ನಾಟಕಗಳನ್ನು ನೋಡುವುದು ಕಡಿಮೆಯಾಗುತ್ತಿದೆ. ಮನೆಗಳಲ್ಲಿ ಗೃಹಿಣಿಯರು ಟಿವಿಯ ಮುಂದೆ ಧಾರಾವಾಹಿಗಳನ್ನು ನೋಡುತ್ತಾ ಕುಳಿತಿರುತ್ತಾರೆ. ಸಿನಿಮಾ, ಧಾರಾವಾಹಿಗಳ ಮೂಲವಾದ ನಾಟಕ ಕಲೆಗೂ ಪ್ರೋತ್ಸಾಹ ನೀಡಬೇಕು ಎಂದ ರಾಮಚಂದ್ರ, ಶಾಂತಲಾ ಕಲಾವಿದರು ತಂಡಕ್ಕೆ ಸರ್ಕಾರದಿಂದ ದೊರಕಬಹುದಾದ ನೆರವು ನೀಡುವುದಾಗಿ ಭರವಸೆ ನೀಡಿದರು.
ಬಿ. ವಿ. ಭಾರತಿ ರಚಿಸಿದ, ಚಿತ್ರಾ ವಿ ನಿರ್ದೇಶನದ ಪಲ್ಲಟ ನಾಟಕದ ಉಚಿತ ಪ್ರದರ್ಶನ ನಡೆದು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಪ್ರಸನ್ನ ಸಾಗರ್ ವಿನ್ಯಾಸ, ಸಂಗೀತ ನಿರ್ವಹಣೆ ಪ್ರಜ್ವಲ್, ವಿ. ಶ್ರೀನಿವಾಸ್ ಬೆಳಕು ಸಂಯೋಜಿಸಿದ್ದರು. ಬಿ.ಎಸ್. ವಿನಯ್, ಚಿತ್ರಾ, ಚೇತನ್, ದಾಕ್ಷಾಯಿಣಿ, ಅಕ್ಷತಾಜೈನ್, ಪ್ರಣವ್, ನಾಗೇಶು, ಸುರೇಶ್ ಪಾತ್ರ ವಹಿಸಿದ್ದರು.

==========================

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು