Thursday, 8 February 2018

ಸಾಮಾಜಿಕ ಜಾಲತಾಣದಲ್ಲಿ ಇಲಾಖೆ ವಿರುದ್ದ ದೂರು ಬಿದ್ರೆ ಏನ್ ಮಾಡ್ತಿದ್ರು ಗೊತ್ತ ಈ ಎಸ್ಪಿ.! #VSS

ಸಾಮಾಜಿಕ ಜಾಲತಾಣದಲ್ಲಿ ಇಲಾಖೆ ವಿರುದ್ದ ದೂರು ಬಿದ್ರೆ ಏನ್ ಮಾಡ್ತಿದ್ರು ಗೊತ್ತಾ ಈ ಎಸ್ಪಿ.!

ಬಹುತೇಕವಾಗಿ ಇಲಾಖೆ ತೇಜೋವದೆ ಮಾಡಿದರೆ ಹಾಗೂ ಸಿಬ್ಬಂದಿಗಳು ಅಶಿಸ್ತಿನಿಂದ ನಡೆದುಕೊಂಡಿದ್ದೇ ಆದರೆ ಅದು ದಾಖಲೆ ಸಮೇತ ಸಾಮಾಜಿಕ ಜಾಲತಾಣ ವಾಟ್ಸಾಫ್, ಫೇಸ್ ಬುಕ್ ಅಂತಹದರಲ್ಲಿ ಕಾಣಿಸಿಕೊಂಡರೆ ಬಹುಶಃ ಕ್ರಮ ತೆಗೆದುಕೊಂಡವರಲ್ಲಿ ಎಸ್ಪಿಗಳಲ್ಲಿ ಮೊದಲಿದರು ಹಿಂದಿನ (2015-2018) ಎಸ್ಪಿ ಎಂದರೆ ಅದು ಕುಲದೀಪ್ ಕುಮಾರ್ ಆರ್ ಜೈನ್.

ಠಾಣೆಗೆ ಯಾಕೆ ಹೋಗಬೇಕು ನ್ಯಾಯ ಸಿಗದೆ ಇದ್ದರೂ ಪರವಾಗಿಲ್ಲ. ಸಾಮಾಜಕ ಜಾಲತಾಣದಲ್ಲಿ ಜನ ನೋಡ್ತಾರೆ ಬಿಡಿ. ಎಂದು ಹಾಕಿದರೆ ಮುಲಾಜೆ ಇಲ್ಲ.. ಅದಕ್ಕೂ ಆಕ್ಷನ್, ರಿಯಾಕ್ಷನ್  ಅದು 20 ಗಂಟೆಯೊಳಗೆ ಹಾಗಿದ್ದರೆ ಅದಕ್ಕೆ ಯಾವುದು ಉದಾಹರಣೆ.. ಅಲ್ಲಾಗಿದ್ದು ಏನು ಎಂಬುದ ನೋಢಿ.
ಸಾಮಾಜಿಕ ಜಾಲತಾಣದಲ್ಲಿ ಠಾಣೆಯೊಂದರಲ್ಲಿ ದೂರು ನೀಡಲು ವಯಸ್ಸಾದ ಹೆಂಗಸ್ಸು ಹೋದಾಗ ದೂರು ಸ್ವೀಕಾರ ಮಾಡಲು ಗಂಟೆಗಟ್ಟಲೆ ಕಾಯಿಸುವುದರ ಜೊತೆಗೆ ಮೇಲಾದಿಕಾರಿಗಳನ್ನೆ ಬೈಯ್ದಿದ್ದ ಪ್ರಸಂಗ ನಡೆದಿತ್ತು.
ಈ ದೂರು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆಯೇ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ಅವರು ಕೂಡಲೇ ಎಲ್ಲಾ ಠಾಣೆಗಳಿಗೂ ಸೌಜನ್ಯದಿಂದ ವರ್ತಿಸುವಂತೆ( ಸಂ/ಚಾಉವಿ/12/2017) ಸೂಚನೆಯನ್ನು 02-03-2017 ರಂದು ನೀಡಿದರು.
ಕೂಡಲೇ ಸಂಬಂದಿಸಿದ ವಿಚಾರಣೆಯನ್ನು  ಪೊಲೀಸ್ ಉಪಾದೀಕ್ಷಕ ಗಂಗಾಧರ ಸ್ವಾಮಿರವರಿಗೆ ವಹಿಸಿ ವಿಚಾರಣೆ ನಡೆಸುವಂತೆ ಎಸ್ಪಿ ಜೈನ್ ಅವರು ಸೂಚಿಸಿದ್ದರು.  ಅದಕ್ಕೆ ಅವರು ಸಮಜಾಯಿಸಿ ನೀಡಿದ್ದಾದರೂ  ಸೂಕ್ತ ತಿಳುವಳಿಕೆ ನೀಡಿ ಅರ್ಜಿ ಮುಕ್ತಾಯಗೊಳಿಸಿದರು.
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ದಾಖಲಾದ ಬಹುತೇಕ ದೂರುಗಳಿಗೆ ಕೇವಲ 24 ಗಂಟೆಯೊಳಗೆ ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುದವರ ಜೊತೆಗೆ ದಕ್ಷತೆ ತೋರಿದ್ದರು ಬಹುತೇಕ ಗಂಬೀರ ಪ್ರಕರಣದಲ್ಲಿ ಕೆಲವು ಪೇದೆಗಳು ತಮ್ಮ ವೇತನ ಕಡಿತಗೊಳಿಕೊಂಡವರು ಇದಕ್ಕೆ  ಸಾಕ್ಷಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.. ಇಂತಹವರಿಗೊಂದು ಸಲಾಂ ಇರಲಿ.. ಇಷ್ಟ ಆದರೆ ಶೇರ್ ಮಾಡಿ…………………ರಾಮಸಮುದ್ರ…ಎಸ್.ವೀರಭದ್ರಸ್ವಾಮಿ……

ಅಗತ್ಯ ದಾಖಲೆ:  ಉಪಾದೀಕ್ಷರ ಸಹಿ, ಮೊಹರಿನ ಪ್ರತಿ… ಶೀಘ್ರದಲ್ಲೇ......wait n see


No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು