Tuesday, 19 September 2017

ಮಹಾಲಯ ಅಮವಾಸ್ಯೆ :ವಿಶೇಷ ಪೂಜೆ ,ಹರಕೆ ಉತ್ಸವ (19-09-2017)

ಮಹಾಲಯ ಅಮವಾಸ್ಯೆ :ವಿಶೇಷ ಪೂಜೆ ,ಹರಕೆ  ಉತ್ಸವ



ಚಾಮರಾಜನಗರ: ಇಂದು (ದಿ:19-09-2017 ರಂದು) ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ನಡೆದ ಮಹಾಲಯ ಅಮವಾಸ್ಯೆ ಪ್ರಯುಕ್ತ ಲಕ್ಷಾಂತರ ಭಕ್ತಾಧಿಗಳು ಪಾಲ್ಗೊಂಡು ವಿಶೇಷ ಪೂಜೆ ,ಹರಕೆ ಹಾಗು ಉತ್ಸವಗಳನ್ನು ನಡೆಸಿದರು. ಬಂದಿದ್ದ ಭಕ್ತಾಧಿಗಳಿಗೆ ಪ್ರಾಧಿಕಾರದ ವತಿಯಿಂದ ವಿಶೇಷ ದರ್ಶನದ ವ್ಯವಸ್ಥೆ,ನೆರಳಿನ ವ್ಯವಸ್ಥೆ,ಕುಡಿಯುವ ನೀರಿನ ವ್ಯವಸ್ಥೆ, ವಿಶೇಷ ದಾಸೋಹದ ವ್ಯವಸ್ಥೆ, ಹಾಗು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಯಿತು.
ದಿ:18-09-17 ರಂದು ಶ್ರೀ ಸ್ವಾಮಿಗೆ ವಿಶೇಷ ಪೂಜೆ ಹಾಗು ಎಣ್ಣೆಮಜ್ಜನದ ಸೇವೆಗಳು ಬಹಳ ವಿಜೃಂಭಣೆಯಿಂದ ನೆರವೇರಿದವು.

ಇದೇ ವೇಳೆ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಕೆ.ಎಂ.ಗಾಯತ್ರಿ ,ಕ.ಆ.ಸೇ(ಹಿ.ಶ್ರೇ) ಅಪರ ಜಿಲ್ಲಾಧಿಕಾರಿಗಳು ಚಾಮರಾಜನಗರ, ಶ್ರೀ ಎಂ.ಬಸವರಾಜು ಉಪಕಾರ್ಯದರ್ಶಿಗಳು, ಶ್ರೀ ರವೀಂದ್ರ ಎಸ್ ಮನ್ವಾಚಾರ್ಯ ಸಹಾಯಕ ಅಭಿಯಂತರರು, ಶ್ರೀ ಮಾಧುರಾಜು ಅಧೀಕ್ಷಕರು, ಶ್ರೀ ಮಹದೇವಸ್ವಾಮಿ ಲೆಕ್ಕಾಧೀಕ್ಷಕರು ಹಾಗು ಎಲ್ಲಾ ನೌಕರ ವರ್ಗದವರು ಪಾಲ್ಗೊಂಡಿದ್ದರು.

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು