ಕೆ.ಎಸ್.ಪಿ ಮೊಬೈಲ್ ಅಪ್ಲಿಕೇಶನ್ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧೀಕೃತ ಮೊಬೈಲ್ ತಂತ್ರಾಂಶವಾಗಿರುತ್ತದೆ. ಈ ತಂತ್ರಾಂಶವು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಆಂಡ್ರಾಯ್ಡ್ ಮತ್ತು ಐಒಎಸ್ ಆವೃತ್ತಿಗಳಲ್ಲಿ ಲಭ್ಯವಿದೆ. ಕೆ.ಎಸ್.ಪಿ ಮೊಬೈಲ್ ತಂತ್ರಾಂಶವು ಈ ಕೆಳಗಿನ ಸೇವೆಗಳನ್ನು ನೀಡುತ್ತದೆ, 1. ಎಸ್.ಒ.ಎಸ್ ಗುಂಡಿಯ ಮೂಲಕ ತುರ್ತುಸ್ಥಿತಿಯ ಬಗ್ಗೆ ಎಸ್ಎಂಎಸ್ ಮೂಲಕ ಯಾವುದೇ ವಿಶ್ವಾಸಾರ್ಹ ಸಂಪರ್ಕಗಳಿಗೆ ಮಾಹಿತಿಯನ್ನು ತಿಳಿಸಲು ನಾಗರೀಕರಿಗೆ ಈ ತಂತ್ರಾಂಶವು ಅನುವುಮಾಡಿಕೊಡುತ್ತದೆ. ಬಳಕೆದಾರರ ದೂರವಾಣಿಯಲ್ಲಿ ಜಿಪಿಎಸ್ ಚಾಲ್ತಿಯಲ್ಲಿದ್ದರೆ, ತಮ್ಮ ಸ್ಥಳವನ್ನು ಸಹ ವಿಶ್ವಾಸಾರ್ಹ ಸಂಪರ್ಕಗಳಿಗೆ ಹಂಚಿಕೊಳ್ಳುವ ಸಾಮರ್ಥ್ಯವನ್ನು ಈ ತಂತ್ರಾಂಶವು ಹೊಂದಿರುತ್ತದೆ. 2. ಕರ್ನಾಟಕ ರಾಜ್ಯ ಪೋಲಿಸ್ ನಾಗರೀಕರಿಗೆ ಈ ತಂತ್ರಾಂದ ಮೂಲಕ ಕೆಲವು ಪೊಲೀಸ್ ಸೇವೆಗಳನ್ನು ಒದಗಿಸಲು ಕ್ರಮ ಕೈಗೊಂಡಿದ್ದು. ಅವು, ಅ) ನಾಗರೀಕರು ತಮ್ಮ ಸಮೀಪದ ಪೋಲಿಸ್ ಠಾಣೆ ಮತ್ತು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಯ ಸಂಪರ್ಕ ಸಂಖ್ಯೆ ಮತ್ತು ಸ್ಥಳವನ್ನು ತಿಳಿಯಬಹುದು. ಪೋಲಿಸ್ ಠಾಣೆಗೆ ತಲುಪಲು ನ್ಯಾವಿಗೇಶನ್ ಲಿಂಕ್ ಗೂಗಲ್ ನಕ್ಷೆಗಳ ಮೂಲಕ ಪಡೆಯಬಹುದು; ಆ) ಫೋಟೋಗಳು, ವೀಡಿಯೊಗಳು, ದಾಖಲೆಗಳು ಮತ್ತು ಆಡಿಯೋ ಫೈಲ್ ಗಳಂತಹ ಲಗತ್ತುಗಳೊಂದಿಗೆ ಕರ್ನಾಟಕದಲ್ಲಿನ ಯಾವುದೇ ಪೋಲೀಸ್ ಘಟಕಗಳಿಗೆ ತಂತ್ರಾಂಶದ ಮೂಲಕ, ತುರ್ತುಸ್ಥಿತಿಯಲ್ಲದ ಘಟನೆಗಳನ್ನು ವರದಿ ಮಾಡಬಹುದು; ಇ) ಕರ್ನಾಟಕದ ಯಾವುದೇ ಪೊಲೀಸ್ ಠಾಣೆಗಳ ಮತ್ತು ಕಛೇರಿಗಳ ವಿಳಾಸ, ದೂರವಾಣಿ ಸಂಪರ್ಕ ಸಂಖ್ಯೆ, ಮಾರ್ಗ ನಕ್ಷೆ ಮತ್ತು ಇ-ಮೇಲ್ ಐಡಿಗಳನ್ನು ಪಡೆಯಬಹುದು; ಈ) ಕರ್ನಾಟಕದಲ್ಲಿ ವರದಿಯಾದ ಯಾವುದೇ ಕಾಣೆಯಾದ ವ್ಯಕ್ತಿಯ ವಿವರಗಳನ್ನು ಪಡೆಯಬಹುದು; ಮತ್ತು, ಉ) ಪ್ರಮುಖ ಘಟನೆಗಳಿಗೆ ಸಂಬಂಧಿಸಿದಂತೆ ನಾಗರೀಕರಿಗೆ ಪೋಲಿಸ್ ರಿಂದ ಪುಶ್ ನೋಟಿಫಿಕೇಶನ್ ಗಳು ಲಭ್ಯವಿರುತ್ತದೆ. ಎಲ್ಲಾ ನಗರ ಪೊಲೀಸ್ / ಜಿಲ್ಲಾ ಪೋಲಿಸ್ ವ್ಯಾಪ್ತಿಯ ಪೊಲೀಸ್ ನಿಯಂತ್ರಣ ಕೊಠಡಿಗಳು ಎಲ್ಲಾ ದೂರುಗಳಿಗೆ ಸ್ಪಂದಿಸಿ, ನಾಗರೀಕರಿಂದ ಸಲ್ಲಿಸಿದ ದೂರುಗಳಿಗೆ ಸ್ವಯಂಚಾಲಿತ ವರದಿ ಸಂಖ್ಯೆಯೊಂದಿಗೆ SMS ದೃಢೀಕರಣ ಕಳುಹಿಸುವ ಸೌಲಭ್ಯವನ್ನು ಹೊಂದಿರುತ್ತದೆ. ನಾಗರೀಕರು ತಂತ್ರಾಂಶದ ಸಲಹೆ ಪುಟದ ಮೂಲಕ ಕರ್ನಾಟಕ ರಾಜ್ಯ ಪೊಲೀಸ್ ಗೆ ತಮ್ಮ ಸಲಹೆಗಳನ್ನು ನೀಡಬಹುದು. Imf.. from Vasanth.
Subscribe to:
Post Comments (Atom)
ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?
ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ ಚಾಮರಾಜನಗ...
ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು
-
ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! . … ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾ...
-
ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್ ವರದಿ ರಾಮಸಮುದ್ರ ಎಸ್.ವೀ...
-
ಮಿಸ್ ಯೂ ಟು ಆಲ್, ಥ್ಯಾಂಕ್ಯು ಟು ಆಲ್ ಎಂದು ಭಾವುಕದಿಂದ ಕಣ್ಣೀರಿಟ್ಟ ಎಸ್ಪಿ ಜೈನ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ...
-
ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.! ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ...
-
ಇಂಜಿನಿಯರಿಂಗ್ ವಿದ್ಯಾರ್ಥಿನಿ: ಆತ್ಮಹತ್ಯೆಗೆ ಯತ್ನ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್...
-
******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. R...
-
ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ...
-
ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ ಐ. ಪಿ.ಎಸ್ ಆದಿಕಾರಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ...
-
ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದ...
-
ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿಹಾಕಿದ ದುಷ್ಕರ್ಮಿಗಳು ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ (ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮ...
No comments:
Post a Comment