



ಚಾಮರಾಜನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ 68ನೇ ಗಣರಾಜ್ಯೋತ್ಸವ
S.VEERABHADRA SWAMY. RAMASAMUDRA
ಚಾಮರಾಜನಗರ ಜನವರಿ26, - ರಾಜ್ಯ ಸಂಕಷ್ಟದಲ್ಲಿದ್ದು, ಚಾಮರಾಜನಗರ ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದ್ದು ತೀವ್ರ ಬರಪರಿಸ್ಥಿತಿಯನ್ನು ಎದುರಿಸುವಲ್ಲಿ ನಾವು ಜನರ ಜೊತೆಗಿದ್ದೆವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್,ತಿಳಿಸಿದರು.
ಅವರು ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 68ನೇ ಗಣರಾಜ್ಯೋತ್ಸ ಕಾರ್ಯಕ್ರಮದಲ್ಲಿ ಧ್ವಜಾರೊಹಣ ನೆರವೇರಿಸಿ ಮಾತನಾಡಿದರು.
ಜಿಲ್ಲಾ ಅಡಳಿತದಿಂದ ಈಗಗಾಲೆ ಜಿಲ್ಲೆಯಲ್ಲಿ ಮೂರು ಗೋಶಾಲೆ ಹಾಗೂ ಐದು ಮೇವು ಬ್ಯಾಂಕ್ ತೆರೆಯಲಾಗಿದ್ದು ಮುಂದಿನ ದಿನಗಳಲ್ಲಿ ಜಾನುವಾರುಗಳ ಸಂರಕ್ಷಣೆಗೆ ಅಗತ್ಯವಿರುವ ಮೇವನ್ನು ಪೊರೈಸಲು ಅಗತ್ಯ ಸಿದ್ದತೆಗಳನ್ನು ಮಡಿಕೊಳ್ಳಲಾಗಿದೆ ಎಂದರು.
ಮುಂಗಾರು ಬೆಳೆ ವಿಫಲವಾಗಿರುವುದರಿಂದ 75774 ಜನ ರೈತರಿಗೆ 40.34 ಕೋಟಿ ಬೆಳೆ ಪರಿಹಾರವನ್ನು ವಿತರಿಸಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಆರ್.ಧ್ರುವನಾರಾಯಣ, ಶಾಸಕ ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತ್ ಅಧ್ಯಕ್ಷ ರಾಮಚಂದ್ರು, ನಗರಸಭಾಧ್ಯಕ್ಷೆ ರೇಣುಕಾ, ತಾಲ್ಲೂಕು ಪಂಚಾಯಿತ್ ಅಧ್ಯಕ್ಷ ಚಂದ್ರು, ಜಿಲ್ಲಾಧಿಕಾರಿ ರಾಮು, ಎಸ್ಪಿ ಕುಲದೀಪ್ಕುಮಾರ್ ಆರ್ ಜೈನ್ ಇತರರು ಹಾಜರಿದ್ದರು
No comments:
Post a Comment