Saturday, 11 June 2016

12-06-2016 ಚಾಮರಾಜನಗರ ಸುದ್ದಿಗಳು

ಚಾಮರಾಜನಗರ: ಜಿಲ್ಲೆಯ ಯಳಂದೂರಿನ ಸ್ಯಾನ್ ಐಟಿ ಸಲ್ಯೂಸನ್ಸ್ ಪ್ರೈ.ಲಿ. ವತಿಯಿಂದ ಕೌಶಲ್ಯ ಅಬಿವೃದ್ದಿ ಮತ್ತು ಸ್ಥಳ ನಿಯುಕ್ತಿ ಯೋಜನೆಯಡಿ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ ನಡೆಯಿತು.
ಯಳಂದೂರು ಪಟ್ಟಣ ಪಂಚಾಯ್ತಿ ವತಿಯಿಂದ ನಡೆದ ಸಲ್ಮ್ ಯೋಜನೆಯ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮವನ್ನು ಪಟ್ಟಣ ಪಂಚಾಯ್ತಿ ಅದ್ಯಕ್ಷರಾದ ಬಿ. ರವಿ ಉದ್ಘಾಟಿಸಿದರು.
ವಿದ್ಯಾರ್ಥಿಗಳು ಇಂದು ತಮ್ಮ ವಿದ್ಯಾಭ್ಯಾಸದ ಜೊತೆಗೆ ವಿವಿದ ಕೌಶಲ್ಯ ತರಬೇತಿಗಳನ್ನು ಪಡೆದು ಜೀವನದ ಬದುಕು ರೂಪಿಸಿಕೊಳ್ಳುವಲ್ಲಿ ಇಂತಹ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಗಳು ಅನುಕೂಲವಾಗಲಿದೆ ಎಂದರು.
ಪಟ್ಟಣ ಪಂಚಾಯ್ತಿ ಸದಸ್ಯರಾದ ಉಮಾಶಂಕರ್ ಅವರು ಮಾತನಾಡಿ ಇಂದಿನ ಆದುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಶಿಕ್ಷಣ ಅಗತ್ಯವಾಗಿದೆ.  ವೈಜ್ಞಾನಿಕವಾಗಿ ಮುಂದುವರೆದಂತೆ ವ್ಯಕ್ತಿಯೂ ಮುಂದುವರೆಯಲು ಸಾದ್ಯವಾಗಿದೆ ಎಂದರು.
ಪಂಚಾಯ್ತಿಯ ಸಂಘಟನಾ ಅಧಿಕಾರಿ ಪರಶಿವಮೂರ್ತಿ ಮಾತನಾಡಿ ತರಬೇತಿ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಬ್ಯಾಂಕ್‍ಗಳು ಕೂಡ ಇಲಾಖೆ ಮುಖಾಂತರ ಸಾಲ ಸೌಲಭ್ಯ ನೀಡಲಿದೆ ಆದ್ದರಿಂದ ಸದುಪಯೋಗಪಡಿಸಿಕೊಂಡು ಸದೃಡವಾಗಿ ಮುಂದೆ ಬನ್ನಿ ಎಂದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ಸ್ಯಾನ್ ಐಟಿ ಸಲ್ಯೂಸನ್ಸ್ ಪ್ರೈ.ಲಿ. ನೂಡಲ್ ಅದಿಕಾರಿ ಬಿಳಿಗಿರಿರಂಗ ಮಾತನಾಡಿ ಕೇವಲ ವಿದ್ಯಾರ್ಥಿಗಳು ಉಚಿತ ತರಬೇತಿ ಎಂದು ಇಂತಹ ಯೋಜನೆಗಳನ್ನು ನಿಲ್ರ್ಯಕ್ಷಿಸದೇ, ತರಬೇತಿ ಪಡೆದು ಜೀವನದ ದಿಕ್ಕನ್ನು ಬದಲಿಸಿಕೊಳ್ಳಲು ನೀವೇ ಸಾರ್ಥಕರಾಗಿರುತ್ತೀರಿ ಎಂದರು.


No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು