Sunday, 4 December 2016

05-12-2016. ಚಾಮರಾಜನಗರ (ಜಯಲಲಿತಾ ಅನಾರೋಗ್ಯ: ಜಿಲ್ಲೆಯ ಗಡಿಭಾಗದಲ್ಲಿ ವ್ಯಾಪಕ ಬಂದೂಬಸ್ತ್ ನಿಯೋಜನೆ)

ಜಯಲಲಿತಾ ಅನಾರೋಗ್ಯ: ಜಿಲ್ಲೆಯ ಗಡಿಭಾಗದಲ್ಲಿ ವ್ಯಾಪಕ ಬಂದೂಬಸ್ತ್ ನಿಯೋಜನೆ
 ವರದಿ : ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಹೃದಯಾಘಾತ ಹಿನ್ನಲೆಯಲ್ಲಿ ಚಾಮರಾಜ ನಗರದ ಎಲ್ಲಾ ಚೆಕ್ ಪೋಸ್ಟ್ ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವರೀಷ್ಟಾದಿಕಾರಿ ಬಂದೂಬಸ್ತ್ ಮಾಡಿದ್ದಾರೆ. ಕಳೆದ ರಾತ್ರಿ ಹೃದಯಾಘಾತ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೆ ಅನಾಹುತಗಳ,ಅವಘಡಗಳು ಸಂಭವಿಸಬಹುದೆಂದು ಮುಂಜಾಗ್ರತವಾಗಿ ಜಿಲ್ಲೆಯ ಎಂಟು ಕಡೆ ಇರುವ ಚೆಕ್ ಪೋಸ್ಟ್ ಅಲ್ಲಿ ಪೊಲೀಸ್ ಸಿಬ್ಬಂದಿಯನ್ನು ಚಾಮರಾಜನಗರ ಪೊಲೀಸ್ ವರೀಷ್ಠಾದಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ನಿಯೋಜಿಸಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ದ ಪಾಲಾರ್,ಗುಂಡ್ಲುಪೇಟೆ ಬಂಡೀಪುರ,ಮೂಲೆಹೊಳೆ,  ಕಕ್ಕೇನಹಳ್ಳ, ಚಾಮರಾಜನಗರದ ಬಿಸಲವಾಡಿ,ಎಲೆಕಟ್ಟೆ ಸೇರಿದಂತೆ ಎಂಟು ಕಡೆ ಭದ್ರತೆ ನಿಯೋಜಿದ್ದಾರೆ. 

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು