Wednesday, 17 April 2019

ಚಾಮರಾಜನಗರ ಲೋಕಸಭಾ ಚುನಾವಣೆ ಬಿರುಸಿನ ಮತದಾನ, ಮತಗಟ್ಟೆಯಲ್ಲಿ ಅದಿಕಾರಿಯೋರ್ವ ಹೃದಯಾಘಾತದಿಂದ ಸಾವು

ಚಾಮರಾಜನಗರದಲ್ಲಿ ಬಿರುಸಿನ ಮತದಾನ:ಹೃದಯಘಾತದಿಂದ ಹೆಚ್ಚುವರಿ ಮತಗಟ್ಟೆ ಅದಿಕಾರಿ ಸಾವು,   
 *ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ*  ಚಾಮರಾಜನಗರ: ಮುಂಜಾನೆಯಿಂದಲೆ ಪ್ರಾರಂಭವಾದ ಲೋಕಸಬಾ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸಿನಿಂದ ಪ್ರಾರಂಭವಾಗಿದೆ.
*ಚಾಮರಾಜನಗರ ಪಟ್ಟಣದಲ್ಲಿದ್ದ ಮತಗಟ್ಟೆ ಸಂಖ್ಯೆ ೬೯ ರಲ್ಲಿ ಮತಯಂತ್ರ ಕೈ ಕೊಟ್ಟದ್ದರಿಂದ ಮತದಾರರು ಸರದಿ ಸಾಲು ಹೆಚ್ಚಾಯಿತು‌. ಜೊತೆಗೆ ವಯೋವೃದ್ದರನ್ನ ಕರೆ ತರಲು ವ್ಹೀಲ್ ಚೇರ್ ಇದ್ದರೂ ಅವರನ್ನ ಮಯಯಂತ್ರ ಸಮೀಪ ಕರೆದೋಯ್ಯಲು ಸ್ವಯಂ ಸೇವಕರಿಲ್ಲದೆ ಕಾಯಬೇಕಾದ ಸ್ಥಿತಿಯೂ ಎದುರಾಯಿತು. *ಚಾಮರಾಜನಗರ ಯಳಂದೂರು ತಾಲ್ಲೂಕಿನ ಉಪ್ಪಿನ ಮೋಳೆ ಗ್ರಾಮದಲ್ಲಿ  ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಾದ ಪುಟ್ಟರಂಗಶೆಟ್ಡಿ ಅವರ ಮತಗಟ್ಟೆ ೨೧೮ ರಲ್ಲಿ ಮತ ಚಲಾಯಿಸಲು ಹೋದಾಗ ಕೈ ಬೆರಳಿಗೆ ಷಾಹಿ ಹಾಕಿಸಿಕೊಂಡು ಮತ ಒತ್ತುವ ಸಂದರ್ಭದಲ್ಲಿ ಮತಯಂತ್ರ ಸುಮಾರು  ಒಂದೂವರೆ ಗಂಟೆಗಳ ಕಾಲ ಕೈ ಕೊಟ್ಟಿತು.
 * ಚಾಮರಾಜನಗರ ಮತಗಟ್ಟೆ ಸಂಖ್ಯೆ ೪೮ ರಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ ದುರ್ಘಟನೆಯೂ ನಡೆದಿದೆ.
*ಹೆಚ್ಚುವರಿ ಮತ ಗಟ್ಟೆ ಅದಿಕಾರಿ ಶಾಂತಮೂರ್ತಿ ಹೃದಯಘಾತದಿಂದ ಸಾವನ್ನಪ್ಪಿರುವ ದುರ್ದೈವಿ ಎಂದು ತಿಳಿದುಬಂದಿದೆ.
 *ಚಾಮರಾಜನಗರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ದ್ರುವ ನಾರಾಯಣ್ ಸ್ವ ಕ್ಷೇತ್ರ ಹೆಗ್ಗವಾಡಿಯಲ್ಲಿ ಮತ ಚಲಾಯಿಸಿದರು.        *ಚಾಮರಾಜನಗರ ಲೋಕಸಭಾ ಕ್ಷೇತ್ರದದಲ್ಲಿ ೭ ರಿಂದ 9 ಗಂಟೆ ವೇಳೆಗೆ ಶೇ.10.18%ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.




















ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು